ಏಕೆ ? ಒಳಮನಸ ಮಾತ

ಏಕೆ ? ಒಳಮನಸ ಮಾತ
ಕೇಳುತಿಲ್ಲ ನೀನು?|
ಕೇಳಿದರೆ ನಿನಗೆಲ್ಲಾ
ಒಳಿತೆಯೇ ಆಗವುದು|
ಕೇಳು ನೀನದರ ಮಾತ||

ಒಳಮನಸು ಪ್ರತಿ ಹಂತದಲ್ಲೂ
ನಿನ್ನನೆಚ್ಚೆರಿಸಿ ತಿಳಿಹೇಳುವುದು
ನೀನು ಮಾಡುತಿಹುದು
ಸರಿಯಲ್ಲವೆಂದು|
ನೀ ಸರಿಯಾದುದ ಮಾಡಿದರೆ
ಅದು ನಿನ್ನ ಆತ್ಮಬಲ ಹೆಚ್ಚಿಸುವುದು||

ಕೇಳು ನೀ ನಿನ್ನ ಒಳಮನಸ
ಗುರುವದುವೇ ನಿನಗೆ
ಕೇಳದ್ದಿದರೆ ಮುಂದೆ
ಪಶ್ಚಾತ್ತಾಪ ಪಡುವೆ|
ಬರೀ ಚತುರ ಬುದ್ದಿಯ
ಮಾತ ಕೇಳಿ ಹಿಗ್ಗಿ
ಹೆಮ್ಮೆ ಪಡುವುದು ತರವೆ|
ಹೃದಯದ ಮಾತನು ಕೇಳುತಿರು||

ಒಳಮನಸಿಗಿದೆ ಸತ್ಯವರಿಯವ ಯುಕ್ತಿ
ಒಳಮನಸಿಗಿದೆ ಸೂಕ್ಷ್ಮಾಸೂಕ್ಷಮತೆ ಶಕ್ತಿ|
ಧರ್ಮ ಅಧರ್ಮವನರಿಯುವ ಪರಿಣತೆ
ಒಳಮನಸು ಸದಾ ಅಜ್ಞಾನವ ಓಡಿಸುವ ಹಣತೆ
ಅದುವೇ ಮಹಾಜ್ಞಾನ ದಾರಿಯ ಪ್ರಣತೆ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿಸರ ರಕ್ಷಿಸಿ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೨೫

ಸಣ್ಣ ಕತೆ

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys